– 47 ಗ್ರಾ.ಪಂಗಳಲ್ಲಿ 2 228 ಸಕ್ರೀಯ ಪ್ರಕರಣ
– ತೆಕ್ಕಾರು ಗ್ರಾ.ಪಂ ಯಾವುದೇ ಪ್ರಕರಣ ಇಲ್ಲ
– 2179 ಮಂದಿ ಹೋಮ್ ಐಸೋಲೇಶನಲ್ಲಿ
– 112 ಮಂದಿ ಅಸ್ಪತ್ರೆಯಲ್ಲಿ ಚಿಕಿತ್ಸೆ
ಬೆಳ್ತಂಗಡಿ: ಪ್ರತಿ ಗ್ರಾಮಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಬೆಳ್ತಂಗಡಿ ತಾಲೂಕಿನ 47 ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ 2,228 ಸಕ್ರೀಯ ಪ್ರಕರಣಗಳು ದಾಖಲಾಗಿದೆ. ಇವರಲ್ಲಿ 2,189 ಮಂದಿ ಹೋಮ್ ಐಸೋಲೇಶನ್ನ
ಲ್ಲಿದ್ದರೆ, 112 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ.
ತಾಲೂಕಿನ 47 ಗ್ರಾಮ ಪಂಚಾಯತುಗಳ ಪೈಕಿ ನೆರಿಯ-150, ಚಾರ್ಮಾಡಿ-148, ನಾವೂರು -103 , ವೇಣೂರು-1೦೦, ಉಜಿರೆ-91 ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ. ವಿಶೇಷ ಎಂದರೆ ತೆಕ್ಕಾರು ಗ್ರಾಮ ಪಂಚಾಯತದಲ್ಲಿ ಇದುವರೆಗೆ ಕೊರೊನಾ ಸೋಂಕಿನ ಯಾವುದೇ ಪ್ರಕರಣ ದಾಖಲಾಗಿಲ್ಲ.
ತಾಲೂಕಿನ ಗ್ರಾಮ ಪಂಚಾಯತುಗಳ ಪೈಕಿ ಅಳದಂಗಡಿ- 60 , ಅಂಡಿಂಜೆ- 47 , ಆರಂಬೋಡಿ-29, ಅರಸಿನಮಕ್ಕಿ-61, ಬಳಂಜ-53, ಬಂದಾರು-54, ಬಾರ್ಯ-11, ಬೆಳಾಲು-12, ಚಾರ್ಮಾಡಿ-148, ಧರ್ಮಸ್ಥಳ-76, ಹೊಸಂಗಡಿ-24, ಇಳಂತಿಲ-14, ಇಂದಬೆಟ್ಟು-49, ಕಡಿರುದ್ಯಾವರ-67, ಕಳಿಯ-27, ಕಳೆಂಜ-56, ಕಲ್ಮಂಜ-15, ಕಣಿಯೂರು-51, ಕಾಶಿಪಟ್ಣ-17, ಕೊಕ್ಕಡ-41, ಕೊಯ್ಯೂರು-15, ಕುಕ್ಕುಡಿ-2೦, ಕುವೆಟ್ಟು-89, ಲಾಲ-53, ಮಚ್ಚಿನ-78, ಮಡಂತ್ಯಾರು-54, ಮಾಲಾಡಿ-69, ಮಲವಂತಿಗೆ-8, ಮರೋಡಿ-63, ಮೇಲಂತಬೆಟ್ಟು-73, ಮಿತ್ತಬಾಗಿಲು-27, ಮುಂಡಾಜೆ-39, ನಡ-54, ನಾವೂರು-103, ನಾರಾವಿ-18, ನೆರಿಯ-150, ನಿಡ್ಲೆ-25, ಪಡಂಗಡಿ-51, ಪಟ್ರಮೆ-3, ಪುದುವೆಟ್ಟು-19, ಶಿಬಾಜೆ-3೦, ಶಿರ್ಲಾಲು-54, ಶಿಶಿಲ-38, ಸುಲ್ಕೇರಿ-19, ತೆಕ್ಕಾರು-೦, ತಣ್ಣೀರುಪಂತ-34, ಉಜಿರೆ-91, ವೇಣೂರು-100, ಸಕ್ರೀಯ ಪ್ರಕರಣಗಳು ಕಂಡು ಬಂದಿದೆ.
112 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ:
ದಾಖಲಾದ ಸಕ್ರೀಯ ಪ್ರಕರಣಗಳಲ್ಲಿ 112 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಜಿರೆ 12, ಚಾರ್ಮಾಡಿ 10, ಧರ್ಮಸ್ಥಳ, ಇಂದಬೆಟ್ಟು ಮತ್ತು ಮಡಂತ್ಯಾರು ತಲಾ 9, ಮರೋಡಿ 6, ಮುಂಡಾಜೆ ಮತ್ತು ತಣ್ಣೀರುಪಂತ ತಲಾ 5, ಕಡಿರುದ್ಯಾವರ, ಕಣಿಯೂರು, ಕುವೆಟ್ಟು, ಲಾಲ, ಅಳದಂಗಡಿ, ಮಾಲಾಡಿ, ನಾವೂರು ತಲಾ 3, ಪುದುವೆಟ್ಟು, ಶಿರ್ಲಾಲು, ಕುಕ್ಕೇಡಿ, ಬೆಳಾಲು, ಮಿತ್ತಬಾಗಿಲು, ಇಳಂತಿಲ, ನೆರಿಯ, ಪಡಂಗಡಿ, ಕಳಿಯ ತಲಾ 2, ಕಲ್ಮಂಜ, ಕೊಯ್ಯೂರು, ಮಚ್ಚಿನ, ಮೇಲಂತಬೆಟ್ಟು, ನಡ, ನಾರಾವಿ, ನಿಡ್ಲೆ ಮತ್ತು ವೇಣೂರು ಗ್ರಾ.ಪಂ ವ್ಯಾಪ್ತಿಯಲ್ಲಿ ತಲಾ 1 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರೆಲ್ಲ ಹೋಮ್ ಐಸೋಲೇಶನ್ನಲ್ಲಿದ್ದಾರೆ.
28 ಮಂದಿ ಸಾವು:
ತಾಲೂಕಿನಲ್ಲಿ ಒಟ್ಟು 28 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಉಜಿರೆಯಲ್ಲಿ 4, ನಾರಾವಿ, ಮುಂಡಾಜೆ ಮತ್ತು ಚಾರ್ಮಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ತಲಾ 3, ಧರ್ಮಸ್ಥಳ 2, ಅಳದಂಗಡಿ, ಅರಸಿನಮಕ್ಕಿ, ಬಾರ್ಯ, ಇಳಂತಿಲ, ಕಣಿಯೂರು, ಕಾಶಿಪಟ್ಣ, ಲಾಲ, ಮಡಂತ್ಯಾರು, ಮಲವಂತಿಗೆ, ಮಿತ್ತಬಾಗಿಲು, ನಾವೂರು, ಶಿರ್ಲಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ತಲಾ 1 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು ಚಿಕಿತ್ಸೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ 50 ಬೆಡ್ ಅಲ್ಲದೆ ಶಾಸಕರ ಮುತುವರ್ಜಿಯಲ್ಲಿ ಈಗಾಗಲೇ ಟಿ.ಬಿ ಆಸ್ಪತ್ರೆಯಲ್ಲಿ 2೦೦ ಬೆಡ್, ಧರ್ಮಸ್ಥಳದ ರಜತದ್ರಿ ಅತಿಥಿಗೃಹದಲ್ಲಿ 5೦೦ ಬೆಡ್ಗಳನ್ನು ಚಿಕಿತ್ಸೆಗೆ ಖಾದಿರಿಸಲಾಗಿದೆ. ಜೊತೆಗೆ ತಾಲೂಕಿನ 8 ಜಿ.ಪಂ ವ್ಯಾಪ್ತಿಗೆ ತಲಾ ಒಂದರಂತೆ ಸಂಚಾರಿ ಗಂಟಲು ದ್ರವ ಪರೀಕ್ಷಾ ವಾಹನಗಳು ಆರಂಭಗೊಂಡಿದ್ದು, ಗಂಟಲು ದ್ರವ ಸಂಗ್ರಹಿಸಿ, ಶೀಘ್ರವಾಗಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಗ್ರಾಮ ಪಂಚಾಯತುಗಳಲ್ಲಿ ಪಿಡಿಒಗಳು, ಕಾರ್ಯದರ್ಶಿಗಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಸೇವೆ ವಿಶೇಷವಾಗಿ ಪರಿಗಣಿಸಬೇಕಾಗಿದೆ. ಜೊತೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಸೇವೆಯೂ ಗಣನೀಯವಾಗಿದೆ. ಒಟ್ಟಿನಲ್ಲಿ ತಾಲೂಕನ್ನು ಕೊರೊನಾ ಮುಕ್ತ ಮಾಡುವಲ್ಲಿ ಎಲ್ಲರೂ ಶ್ರಮಪಟ್ಟು ದುಡಿಯುತ್ತಿದ್ದಾರೆ.