ತಾಲೂಕು ಸುದ್ದಿ

ಇ.ಎಂ.ಐ ಹಾಗೂ ಅವಧಿ ಮೀರಿದ ಸಾಲಗಳ ವಸೂಲಾತಿಗೆ ತಡೆ ನೀಡುವಂತೆ ಸರಕಾರಕ್ಕೆ ಶಾಸಕರ ಮನವಿ

ಬೆಳ್ತಂಗಡಿ: ಕೋವಿಡ್ -19ರ ಸಲುವಾಗಿ ಲಾಕ್ಡೌನ್ ವಿಧಿಸಿದ ಪರಿಣಾಮ ಸಾಮಾನ್ಯ ಜನರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಉದ್ಯಮ ಹಾಗೂ ವ್ಯವಹಾರಗಳಿಗಾಗಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನಿಂದ ಸಾಲ ಪಡೆದ ಉದ್ದಿಮೆದಾರರು ಆರ್ಥಿಕ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದಾರೆ, ಈ ನಿಟ್ಟನಲ್ಲಿ ಎಲ್ಲಾ ಮಾದರಿಯ ಹಣಕಾಸು ಸಂಸ್ಥೆಗಳು ಗ್ರಾಹಕರ ಮೇಲೆ ವಿಧಿಸಿರುವ ಇ.ಎಂ.ಐ ಹಾಗೂ ಅವಧಿ ಮೀರಿದ ಸಾಲಗಳ ವಸೂಲಾತಿಗೆ ಪರಿಸ್ಥಿತಿ ಸುಧಾರಿಸುವ
ವರೆಗೆ ತಡೆ ನೀಡುವ ಕುರಿತು ರಾಜ್ಯ ಸರ್ಕಾರ
ಕ್ಕೆ ಉಸ್ತುವಾರಿ ಸಚಿವ
ರಾದ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಶಾಸಕರಾದ ಹರೀಶ್ ಪೂಂಜ ಮನವಿ ನೀಡಿದರು.

ನಿಮ್ಮದೊಂದು ಉತ್ತರ