ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ *ಕೋವಿಡ್ 19 ಮುಂಜಾಗ್ರತಾ ಕ್ರಮವಾಗಿ* ಮೇ 9 ರಂದು ನಡೆದ ಧರ್ಮಸ್ಥಳ ಗ್ರಾಮ ಕಾರ್ಯಪಡೆ ತೀರ್ಮಾನಿಸಿದಂತೆ. *ಬೆಂಗಳೂರು ಹಾಗೂ ಹೊರಜಿಲ್ಲೆಗಳಿಂದ* ಆಗಮಿಸುವವರ ಬಗ್ಗೆ ನಿಗಾವಹಿಸಲಾಗಿದೆ. ಧರ್ಮಸ್ಥಳ ಗ್ರಾಮದ ಕಲ್ಲೇರಿ, ನೀರ ಚಿಲುಮೆ , 300 ಮುಂಡ್ರಪ್ಪಾಡಿ,
ಗಡಿಭಾಗದಲ್ಲಿಪೊಲೀಸ್ ಇಲಾಖೆಯಿಂದ ಹಾಗೂ ಗ್ರಾಮ ಕಾರ್ಯ ಪಡೆಯಿಂದ ತಂಡವನ್ನು ರಚಿಸಲಾಗಿದ್ದು . ಮೇ 09 ರಂದು *ರಾತ್ರಿ
ವೇಳೆ75ವಾಹನಗಳನ್ನು ತಡೆಹಿಡಿದು 159 ಜನರನ್ನು ತಪಾಸಣೆ ನಡೆಸಿ ಧರ್ಮಸ್ಥಳ ಗ್ರಾಮಕ್ಕೆ ಹೊರ ಜಿಲ್ಲೆಯಿಂದ ಆಗಮಿಸಿದ 13 ಜನರನ್ನು ಆರೋಗ್ಯ ತಪಾಸಣೆ ನಡೆಸಿ ಮನೆಯಿಂದ ಹೊರಗೆ ಹೋಗದಂತೆಹೋಮ್ ಕ್ವಾರಂಟೈನ್ ಮಾಡಲಾಗಿದೆ.* ತಪಾಸಣೆ ವೇಳೆ ಹೆಚ್ಚಿನವರು ಬೆಂಗಳೂರಿನಿಂದ ಬಂದವರಾಗಿದ್ದು, ಉಡುಪಿ
ಜಿಲ್ಲೆಗೆ ಹೋಗುವವರಾಗಿರುತ್ತಾರೆ . ಪೊಲೀಸ್ ಇಲಾಖೆಸಿಬ್ಬಂದಿಗಳೊಂದಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿಉಪಾಧ್ಯಕ್ಷ ಪಿ .ಶ್ರೀನಿವಾಸರಾವ್, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಗೌಡ, ಹರೀಶ್ ಸುವರ್ಣ, ಹರ್ಷಿತ್ ಜೈನ್, ರವಿಕುಮಾರ್, ದಿನೇಶ್ ರಾವ್, ಮುರಲೀಧರ ದಾಸ್, ಸುಧಾಕರ ನಡುಗುಡ್ಡೆ, ಹಾಗೂ ಗ್ರಾಮ ಕಾರ್ಯಪಡೆ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವಯಂಸೇವಕರು ಇದ್ದು ಸಹಕರಿಸಿದರು. ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಆಗಮಿಸುವವರ ಮಾಹಿತಿಯನ್ನು ಗ್ರಾಮ ಕಾರ್ಯಪಡೆಗೆ ನೀಡುವಂತೆ ಗ್ರಾಮಸ್ಥರು ಸಹಕರಿಸುವಂತೆ ವಿನಂತಿಸಲಾಗಿದೆ.