ತಾಲೂಕು ಸುದ್ದಿ

ಪಡುಮಲೆ ಬ್ರಹ್ಮಕಲಶೋತ್ಸವ ಕುವೆಟ್ಟು ವಿಭಾಗದ ಪೂರ್ವಭಾವಿ ಸಭೆ

ಕುವೆಟ್ಟು: ಎ.22 ರಿಂದ 24 ರವರೆಗೆ ಕೋಟಿ ಚೆನ್ನಯರ ಜನ್ಮಸ್ಥಾನ ಹಾಗೂ ಮೂಲಸ್ಥಾನ ಪಡುಮಲೆಯ ನಾಗಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿಬೈದೆದಿ ಸಾನಿಧ್ಯದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿ ಸಭೆಯು ಗುರುವಾಯನಕೆರೆಯ ಗೆಳೆಯರ ಬಳಗ ಶಾರದಮಂಟಪದಲ್ಲಿ ಎ.12ರಂದು ಜರಗಿತು.


ಸಭೆಯ ಅಧ್ಯಕ್ಷತೆಯನ್ನು ಪಡುಮಲೆ ಬ್ರಹ್ಮಕಲಶೋತ್ಸವ ಸಮಿತಿ ಕುವೆಟ್ಟು ಜಿಲ್ಲಾ ಪಂಚಾಯತ್ ಕೇಂದ್ರದ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ಮುಂಡೂರು ವಹಿಸಿದ್ದರು. ಸಭೆಯಲ್ಲಿ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಾಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಗೀರಥ ಜಿ, ಖಜಾಂಚಿ ಶೈಲೇಶ್ ಕುಮಾರ್ ಕುರ್ತೋಡಿ, ಸಂಪತ್ ಬಿ. ಸುವರ್ಣ, ಬ್ರಹ್ಮಕಲಲಶೋತ್ಸವ ಸಮಿತಿಯ ಕಾರ್ಯದರ್ಶಿ ಅನಿಲ್ ಕುಮಾರ್ , ತಾಲೂಕು ಕೋಶಾಧಿಕಾರಿ ಎಂ.ಕೆ ಪ್ರಸಾದ್, ಗೆಳೆಯರ ಬಳಗ ಗುರುವಾನಕೆರೆಯ ಅಧ್ಯಕ್ಷ ಮೋಹನ್ ಕಂಚಿಂಜ, ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ

ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷ ರೀಟಾ ವೈ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದ ಕುವೆಟ್ಟು ಜಿಲ್ಲಾಪಂಚಾಯತ್ ಕೇಂದ್ರದ ಕಾರ್ಯದರ್ಶಿ ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಪ್ರಶಾಂತ್ ಪ್ರತಿಮ ನಿಲಯ ಸ್ವಾಗತಿಸಿ, ಅನೂಪ್ ಜೆ. ಬಂಗೇರ ವಂದಿಸಿದರು.

ನಿಮ್ಮದೊಂದು ಉತ್ತರ