ಗ್ರಾಮಾಂತರ ಸುದ್ದಿ

ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ವರ್ಷಾವಧಿ ಜಾತ್ರೋತ್ಸವ

ಗುರುವಾಯನಕೆರೆ: ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.೧೨ರಂದು ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ೮ಕ್ಕೆ ಪ್ರಾರ್ಥನೆ, ೮.೩೦ಕ್ಕೆ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ತರಲಾಯಿತು. ಬಳಿಕ ತೋರಣ ಮೂಹೂರ್ತ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಪಂಚವಿಂಶತಿ ಕಲಶಪೂರಣೆ, ಕಲಶಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಧ್ವಜಾರೋಹಣ, ಬಲಿ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯಿತು.
ಸಂಜೆ ೬.೩೦ಕ್ಕೆ ದೈವದ ಬಲಿ ಉತ್ಸವ ನಡೆಯಿತು. ರಾತ್ರಿ ೯.೩೦ರಿಂದ ಕೊಡಮಣಿತ್ತಾಯ ದೈವದ ನೇಮೋತ್ಸವ ವೈಭವಪೂರ್ಣವಾಗಿ ಜರುಗಿತು. ಮರುದಿನ ಬೆಳಗ್ಗೆ ಧ್ವಜಾರೋಹಣ, ಶುದ್ಧಿಕಲಶ ನಡೆಯಿತು. ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸುಖೇಶ್ ಕುಮಾರ್ ಕಡಂಬು, ಸುನೀಶ್ ಕುಮಾರ್ ಕಡಂಬು ಇವರ ನೇತೃತ್ವದಲ್ಲಿ ಊರವರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಪ್ರವೀಣ್ ಕುಮಾರ್ ಜೈನ್ ಪಡ್ಯಾರು ಬೀಡು, ವೃಷಭ ಆರಿಗಾ ಹಾಗೂ
ಊರ-ಪರವೂರ ಭಕ್ತರು ಅಧಿಕ ಸಂಖ್ಯೆಲ್ಲಿ ಭಾಗವಹಿಸಿದ್ದರು. ಶ್ರೀಮತಿ ಕಾಶಿಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಕೃಪಾ ಶಕ್ತಿನಗರ ಇವರಿಂದ ಭಕ್ತರಿಗೆ ಅನ್ನದಾನದ ಸೇವೆ ನಡೆಯಿತು.

ನಿಮ್ಮದೊಂದು ಉತ್ತರ