ಗ್ರಾಮಾಂತರ ಸುದ್ದಿ

ಮುಂಡೂರು ಶ್ರೀ ದುಗಾ೯ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್

ಮುಂಡೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಂಡೂರು ಇದರ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಅರ್ಚಕ ಅರವಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಆನಂದ ಆಚಾರ್ಯ ಮುಂಗುಡಮೆ, ಗೀತಾ ಕೇಶವ ಮೂಲ್ಯ ಕಕ್ಕುಡೆ, ರಾಮದಾಸ್ ಭಟ್ ಮುಂಡೂರು, ವಿಶ್ವನಾಥ ಶೆಟ್ಟಿ ಹುಣಿಂಜೆ, ಉಮಾವತಿ ನಾಕ ಕಾಡಂಗೆ, ಅಶೋಕ್ ಕುಮಾರ್ ಕೊಡಕ್ಕಾಲ್, ಆಶೋಕ್ ಕುಮಾರ್ ಜೈನ್ ಮುಂಡೂರು ನೇಮಕಗೊಂಡಿದ್ದಾರೆ. ಅಧ್ಯಕ್ಷ ಸಂತೋಷ್ ಕುಮಾರ್ ಅವರು ಮೇಲಂತಬೆಟ್ಟು ಗ್ರಾ.ಪಂ ಸದಸ್ಯರಾಗಿ, ಮುಂಡೂರು ಹಾ.ಉ.ಸ.ಸಂಘದ ಉಪಾಧ್ಯಕ್ಷರಾಗಿ, ಮುಂಡೂರು ಶ್ರೀ ನಾಗಾಂಬಿಕ ಭಜನಾ ಮಂಡಳಿ ಅಧ್ಯಕ್ಷ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ