ಗುರುವಾಯನಕೆರೆ: ಗುರುವಾಯನಕೆರೆ ಪಿಲಿಚಂಡಿಕಲ್ಲಿನಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವ ಕಾರ್ಯಕ್ರಮ ಸರಕಾರದ ಕೋವಿಡ್-೧೯ರ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಸಂಪ್ರದಾಯ ಬದ್ಧವಾಗಿ ಜ.೩೦ರಂದು ಪಿಲಿಚಂಡಿಕಲ್ಲಿನಲ್ಲಿ ಜರುಗಿತು.
ಸಂಜೆ ೫ ಗಂಟೆಗೆ ಪಾಡ್ಯಾರು ಬೀಡು ಮನೆಯಿಂದ ಪಿಲಿಚಂಡಿಕಲ್ಲು ತನಕ ದೈವದ ಭಂಡಾರವನ್ನು ಮೆರವಣಿಗೆ ಮೂಲಕ ತರಲಾಯಿತು. ರಾತ್ರಿ ೮.೩೦ರಿಂದ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವ ಸಂಪ್ರಾದಾಯದಂತೆ ನಡೆಯಿತು. ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಮಾಜಿ ತಾಪಸ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಉದ್ಯಮಿ ಸಂಪತ್ಕುಮಾರ್, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ ಸೇರಿದಂತೆ ಊರ ಹಾಗೂ ಪರವೂರ ಭಕ್ತಾಧಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೊಂಪದಬಲಿ ಉತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಕೆ, ಗೌರವಾಧ್ಯಕ್ಷ ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರು ಬೀಡು, ಶ್ರೀನಿವಾಸ ಅಸ್ರಣ್ಣರು ಮೂಡುಮನೆ, ಸಮಿತಿ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕೆ. ಪಾಡ್ಯಾರು, ಕೋಶಾಧಿಕಾರಿ ಕೇಶವ ಆಚಾರ್ಯ ಪಾಡ್ಯಾರು, ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಕಾರ್ಯದರ್ಶಿ ರಾಮಚಂದ್ರ ಶೆಟ್ಟಿ ಶಕ್ತಿನಗರ, ಪಾಡ್ಯಾರು ಗೆಳೆಯರ ಬಳಗ, ಕೇಸರಿ ಬಳಗ ಪಿಲಿಚಾಮುಂಡಿಕಲ್ಲು, ಸಾಯಿರಾಂ ಫ್ರೆಂಡ್ಸ್ ಶಕ್ತಿನಗರ ಇದರ ಪದಾಧಿಕಾರಿಗಳು ಸದಸ್ಯರು, ಹಾಗೂ ಊರಿನ ಭಕ್ತರು ಪೂರ್ಣ ಸಹಕಾರ ನೀಡಿದರು.