ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ವೇಣೂರು: ಪವಿತ್ರ ಫಲ್ಗಣಿ ತುಳು ಯಕ್ಷಗಾನ ಕೃತಿ ಬಿಡುಗಡೆ

ವೇಣೂರು: ಪವಿತ್ರ ಫಲ್ಗುಣಿ ತುಳು ಯಕ್ಷಗಾನ ಕೃತಿ ಬಿಡುಗಡೆ


ವೇಣೂರು: ನಾಟಕ ರಚನೆಗಾರ, ವೇಣೂರು ಐಸಿರಿ ಕಲಾ ತಂಡದ ಸಂಚಾಲಕ ವಿ.ಎನ್. ಕುಲಾಲ್ ಚೊಚ್ಚಲವಾಗಿ ರಚಿಸಿದ ಪವಿತ್ರ ಫಲ್ಗುಣಿ ಎಂಬ ತುಳು ಯಕ್ಷಗಾನದ ಕೃತಿಯನ್ನು ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜ ಅವರು ಬಿಡುಗಡೆಗೊಳಿಸಿದರು.
ವಿ.ಎನ್. ಕುಲಾಲ್ ಅವರು ರಚಿಸಿರುವ 12 ತುಳು ನಾಟಕಗಳು ದ.ಕ, ಉಡುಪಿ, ಕಾಸರಗೋಡು ಹಾಗೂ ಮುಂಬೈಯಲ್ಲೂ ಪ್ರದರ್ಶನಗೊಂಡಿದೆ. ನಾಟಕಕ್ಕೆ ನಿರ್ದೇಶನ ನೀಡುವುದಲ್ಲದೆ ನಟರಾಗಿಯೂ ಸೇವೆ ನೀಡುತ್ತಿದ್ದಾರೆ. ಇವರ ನಾಟಕಕ್ಕೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಶಸ್ತಿಯೂ ಲಭಿಸಿದೆ. ಇದೀಗ ಪ್ರಥಮವಾಗಿ ತುಳು ಕಾಲ್ಪನಿಕ ಕಥೆ ಆದರಿತ ಪವಿತ್ರ ಫಲ್ಗುಣಿ ಎಂಬ ತುಳು ಯಕ್ಷಗಾನದ ಕೃತಿಯನ್ನು ರಚಿಸಿ ಹಿರಿಯಡ್ಕ ಯಕ್ಷಗಾನ ಮೇಳಕ್ಕೆ ಅರ್ಪಿಸಿದ್ದಾರೆ. ಶೀಘ್ರದಲ್ಲೇ ಪ್ರದರ್ಶನಗೊಳ್ಳುವ ನಿರೀಕ್ಷೆಯನ್ನು ವಿ.ಎನ್. ಕುಲಾಲ್ ವ್ಯಕ್ತಪಡಿಸಿದ್ದಾರೆ.
ಕೃತಿ ಬಿಡುಗಡೆ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್, ಹಿರಿಯಡ್ಕ ಯಕ್ಷಗಾನ ಮೇಳದ ಭಾಗವತ ಸುಜಯ್ ಹೆಗ್ಡೆ ಕುತ್ಲೂರು, ಮೇಳದ ಮೆನೇಜರ್ ವಾಮನ ಕುಮಾರ್, ಪ್ರಮುಖರಾದ ಅಣ್ಣು ಮೇಸ್ತ್ರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ