ಧರ್ಮಸ್ಥಳ: ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರಿಗೆ ಗುತ್ತಿಗೆ ಆಧಾರದಲ್ಲಿ ವಾಹನ ಸೌಲಭ್ಯ ಒದಗಿಸಿದ್ದ ನರಸಿಂಹ ಪ್ರಭು ಅಲ್ಪಕಾಲದ ಅಸೌಖ್ಯದಿಂದ ಜೂ.3 ರಂದು ನಿಧನರಾಗಿದ್ದಾರೆ.
ಇವರು ಧರ್ಮಸ್ಥಳದಲ್ಲಿ ಹೊಟೇಲ್ ಕೂಡ ನಡೆಸುತ್ತಿದ್ದರು. ಅಸೌಖ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ನರಸಿಂಹರನ್ನು ದಾಖಲಿಸಲಾಗಿತ್ತು. ನರಸಿಂಹ ಪ್ರಭು ರವರ ಕಾರ್ಯವೈಖರಿ,ಅವರ ಸರಳತೆಯಿಂದ ಅಧಿಕಾರಿಗಳ ಪ್ರೀತಿ ವಿಶ್ವಾಸ ಕ್ಕೆ ಪಾತ್ರರಾಗಿದರು.