ಬೆಳ್ತಂಗಡಿ : ಮೇ 22ರಂದು ಸಿಂಗಾಪೂರದಲ್ಲಿ ವಿಧಿವಶರಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮರವರ ಪಾರ್ಥಿವ ಶರೀರವನ್ನು ಚಾರ್ಮಾಡಿ ಯಿಂದ ಉಜಿರೆ ತನಕ ಮೆರವಣಿಗೆಯಲ್ಲಿ ತಂದು ನಂತರ ಎಸ್ಡಿಎಂ ಕಾಲೇಜು ಒಳಾಂಗಣದಲ್ಲಿ ಸಾವ೯ಜನಿಕ ದಶ೯ನಕ್ಕೆ ಅವಕಾಶ ಮಾಡಿಕೊಡಲಾಯಿತು.
ಮೇ.23ರಂದು ರಾತ್ರಿ 12 ಗಂಟೆಗೆ ಸಿಂಗಾಪುರದಿಂದ ಇಂಡಿಗೋ ವಿಮಾನದಲ್ಲಿ ಹೊರಟು ಮಂಗಳವಾರ ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.
ವಿಮಾನ ನಿಲ್ದಾಣದ ಕಾನೂನು ಪ್ರಕ್ರಿಯೆ ಮುಗಿಸಿಕೊಂಡ ಬಳಿಕ ಸುಮಾರು 11ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಂಬ್ಯುಲೆನ್ಸ್ನಲ್ಲಿ ರಸ್ತೆಯ ಮೂಲಕ ಚಾರ್ಮಾಡಿಗೆ ಅಗಮಿಸಿ ಮತ್ತೂರು ದೇವಸ್ಥಾನದ ಪಕ್ಕದ ಅಂಗಣಕ್ಕೆ ಆಗಮಿಸಿ ಅಲ್ಲಿಂದ ವಾಹನ ಮೆರವಣಿಗೆ ಮೂಲಕ ಉಜಿರೆ ಸರ್ಕಲ್ಗೆ ತರಲಾಯಿತು.
ಅಲ್ಲಿಂದ ತೆರೆದ ವಾಹನದ ಕಾಲ್ನಡಿಗೆಯಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಒಳಾಂಗಣ ತಂದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ನಂತರ ಸಂಜೆ ನೀರಚಿಲುಮೆಯ ಅವರ ನಿವಾಸದಲ್ಲಿ ಅಂತ್ಯಸಂಸ್ಕಾರ ಕಾರ್ಯ ನೇರವೆರಲಿದೆ.
ಮೃತರು ಗೌರವಾಥ ೯ ಉಜಿರೆ ಪೇಟೆಯ ವತ೯ಕರು ಅಂಗಡಿ ಮುಂಗಟ್ಟು ಬಂದ್ ಮಾಡಲಾಡಿ ಸಂತಾಪ ಸೂಚಿಸಿದರು.