ತಾಲೂಕು ಸುದ್ದಿ

ಏಕಾಏಕಿ ಹರಿದ ನದಿ ನೀರಲ್ಲಿ ಸಿಲುಕಿ ಮುಳುಗಿದ ಪಿಕಾಫ್

ಚಾರ್ಮಾಡಿ ಗ್ರಾಮ ಪಂಚಯಾತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದಲ್ಲಿಉರ್ಪೆಲ್ ಗುಡ್ಡೆ ಎಂಬಲ್ಲಿ ಮೇ 26 ರಂದು ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೀರಿನ ಏರಿಕೆ ಉಂಟಾಗಿ ಪಿಕಪ್ ವಾಹನ ನೀರಲ್ಲಿ ಮುಳುಗಿದ ಘಟನೆ ನಡೆದಿದೆ.


ಅಳದಂಗಡಿ ಕಡೆಯ ಪಿಕಪ್ ವಾಹನದಲ್ಲಿ ಇಲ್ಲಿನ ಎಂಕೆ ದಯಾನಂದ ಎಂಬವರ ಮನೆಗೆ ನದಿ ಹಾದಿಯ ಮೂಲಕ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನ ನದಿಯ ಮಧ್ಯಭಾಗಕ್ಕೆ

ಬರುತ್ತಿದ್ದಂತೆಯೇ ಭಾರಿ ಪ್ರಮಾಣದ ನೀರು ಹರಿದು ಬಂದಿದೆ.ವಾಹನ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯ ಅರಿತು ಕಂಗಾಲಾದ ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಇನ್ನೋರ್ವ ಸೈಡ್ ಗ್ಲಾಸ್ ಹಾಕಿ ಗಾಡಿಯಿಂದ ಇಳಿದು ನದಿಯಿಂದ ಮೇಲೆ ಬಂದಿದ್ದಾರೆ.


ಪಿಕಪ್ ಅಲ್ಲಿಯೇ ಸಿಲುಕೊಕೊಂಡಿದ್ದು, ಚಾಲಕ ಮೊಬೈಲ್ ನಲ್ಲಿ ಕರೆಮಾಡಿ ಇತರರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರು ನೀರಿಗೆ ಇಳಿದು ಪಿಕಪ್ ಗೆ ಹಗ್ಗ ಹಾಕಿ ಮರಕ್ಕೆ ಕಟ್ಟಿದರು. ನೀರಿನ ಮಟ್ಟ ಮತ್ತಷ್ಟು ಮೇಲೇರಿದ್ದು ಪಿಕಪ್ ಮಗುಚಿ ಬಿದ್ದಿದೆ. ಎರಡು ಮೂರು ಪಲ್ಟಿಯಾಗಿ ಹಗ್ಗದ ಸಹಾಯದಿಂದ ನಿಂತಿದೆ. ಎಸ್.ಕೆ. ಎಸ್.ಎಸ್.ಎಫ್.ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ತಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪ್ ನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದಾರೆ.ಪಿಕಪ್ ಸಂಪೂರ್ಣ ನುಜ್ಜುಗಿಜ್ಜಾಗಿದೆ.


ಸ್ಥಳೀಯ ವಿಖಾಯ ತಂಡದ ಸಿರಾಜ್ ಚಿಬಿದ್ರೆ, ರಫೀಕ್, ನಝೀರ್ ಬಿಕೆ,ಇಕ್ಬಾಲ್ ಕೋನ, ಇಮ್ರಾನ್,ಆಸಿಫ್,ಅದ್ದು, ಉಸ್ಮಾನ್ ಹಾಗೂ ಇತರರು ಪಿಕಪ್ನ್ನು ಮೇಲೆತ್ತಲು ಸಹಕರಿಸಿದರು.ಮಳೆ ಇಲ್ಲದಿದ್ದರೂ ನೀರಿನ ಏರಿಕೆಕಳೆದ ಮೂರು ದಿನಗಳಿಂದ ಮೃತ್ಯುಂಜಯ ನದಿ ಹರಿಯುವ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ.ಆದರೂ ನದಿಯಲ್ಲಿ ಭಾರಿ ಪ್ರಮಾಣದ ನೀರು ಏಕಾಏಕಿ ಏರಿಕೆಯಾಗಿದೆ.ಇದಕ್ಕೆ ಕಾರಣ ತಿಳಿದು ಬಂದಿಲ್ಲ.ಕಳೆದ 2019ರ ಪ್ರವಾಹದ ಬಳಿಕ ಇಲ್ಲಿನ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಯ ನೀರಿನ ಮಟ್ಟ ಸಾಮಾನ್ಯ ಮಳೆಗೂ ಆಗಾಗ ಭಾರಿ ಏರಿಕೆಯಾಗುತ್ತಿರುವುದು ನದಿ ಪ್ರದೇಶದಲ್ಲಿ ವಾಸವಿರುವ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ.ಮೇ ತಿಂಗಳಲ್ಲೇ ಮೂರನೇ ಬಾರಿ ನದಿ ಹರಿವಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ.
.

ನಿಮ್ಮದೊಂದು ಉತ್ತರ