ರಾಜ್ಯ ವಾರ್ತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ಹೊಸ ಅವಕಾಶಗಳ ನಾಡು ಆಗಿದ್ದು, ಈ ನಿಟ್ಟಿನಲ್ಲಿ ಐಎನ್ಎಸ್ ವಿಕ್ರಾಂತ್ ಅನ್ನು ಪ್ರಾರಂಭಿಸುವುದು ಎಲ್ಲಾ ನಾಗರಿಕರಿಗೆ ಹೆಮ್ಮೆಯ ಕ್ಷಣವಾಗಿದೆ. ನಾವು 3700 ಕೋಟಿ ರೂ.ಗಳ ವಿವಿಧ ಕೈಗಾರಿಕಾ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಗಳು ವ್ಯಾಪಾರ ಮತ್ತು ವಾಣಿಜ್ಯವನ್ನು ಬಲಪಡಿಸಲು ಸಹಾಯ ಮಾಡುತ್ತವೆ ಮತ್ತು ಸುಗಮ ವ್ಯಾಪಾರದಲ್ಲಿ ಹೆಚ್ಚಳವಾಗುತ್ತವೆ ಅಂತ ತಿಳಿಸಿದರು.
ಸಾಗರ ಮಾಲಾ ಯೋಜನೆಯಿಂದ ದೇಶದ ಕರಾವಳಿ
ಭಾಗಕ್ಕೆ ಶಕ್ತಿ ಬರುತ್ತಿದೆ, ಮೇಕ್ ಇಂಡಿಯಾವನ್ನು ನಾವು ಬಲಪಡಿಸುವುದು ಅಗತ್ಯವಾಗಿದೆ. ನಮ್ಮಲ್ಲಿ ರಫ್ತು ಹೆಚ್ಚಾಗಬೇಕಾಗಿದ್ದು, ವಿಶ್ವಮಟ್ಟದಲ್ಲಿ ನಾವು ಸ್ಪರ್ಧೆ ಮಾಡಬೇಕಾಗಿದೆ. ಇಲ್ಲಿನ ಯೋಜನೆಗಳಿಂದ ದೇಶ ಹಾಗೂ ಕರ್ನಾಟಕಕ್ಕೆ ಭಾರಿ ಪ್ರಮಾಣದಲ್ಲಿ ಲಾಭವಾಗಲಿದ್ದು, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವಾಗಲಿದೆ ಅಂತ ತಿಳಿಸಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದ ಮೂಲಕ, ನಾವು ಕರ್ನಾಟಕದಲ್ಲಿ ಕುಶಲಕರ್ಮಿಗಳಿಗೆ ಮಾರುಕಟ್ಟೆ ಅವಕಾಶಗಳನ್ನು ತೆರೆಯಲು ಸಾಧ್ಯವಾಗುತ್ತದೆ. ಮೇಕ್ ಇನ್ ಇಂಡಿಯಾದ ಯಶಸ್ಸು, ಹೆಚ್ಚುತ್ತಿರುವ ರಫ್ತು ಭಾರತದ ಅಭಿವೃದ್ಧಿಗೆ ನಿರ್ಣಾಯಕವಾಗಿದೆ. ಇದನ್ನು ಬೆಂಬಲಿಸಲು ನಾವು ಉತ್ತಮ ಲಾಜಿಸ್ಟಿಕ್ಸ್ ಗಾಗಿ ನಮ್ಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಅಂತ ತಿಳಿಸಿದರು.
ಇದೇ ವೇಳೆ ಅವರು ಮಾತನಾಡುತ್ತ, ಒಂದು ಜಿಲ್ಲೆ ಒಂದು ಉತ್ಪನದ ಪ್ರಾಮುಖ್ಯತೆಯನ್ನು ಅವರು ತಿಳಿಸಿಕೊಟ್ಟರು. ಇನ್ನೂ 8 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೂಲ ಭೂತ ಸೌಕರ್ಯಗಳಲ್ಲಿ ಬದಲಾವಣೆಯಾಗಿದ್ದು, ಅದರ ಲಾಭವನ್ನು ಕರ್ನಾಟಕ ಪಡೆದುಕೊಂಡಿದೆ. 30 ಲಕ್ಷ ಹೆಚ್ಚು ಬಡತನ ಕುಟುಂಬಕ್ಕೆ ಆಯ್ಕುಶಾನ್ ಕಾರ್ಡ್ ನೀಡಲಾಗಿದೆ. ಇದಲ್ಲದೇ 30 ಲಕ್ಷಕ್ಕೂ ಅಧಿಕ ಮಂದಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದೆ ಅಂತ ಹೇಳಿದರು. ಇನ್ನೂ ರೈತರು, ಮೀನುಗಾರರು, ಸಣ್ಣಪುಟ್ಟ ವ್ಯಾಪಾರಿಗಳು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅಂತ ತಿಳಿಸಿದರು. 21 ನೇ ಶತಮಾನದಲ್ಲಿ, ಭಾರತವು ‘ಹಸಿರು ಬೆಳವಣಿಗೆ’ಯ ದೃಷ್ಟಿಕೋನದೊಂದಿಗೆ

ಮುಂದುವರಿಯುತ್ತಿದೆ. ಕರ್ನಾಟಕದ
ಸಂಸ್ಕರಣಾಗಾರಗಳಲ್ಲಿ ಬಳಸಲಾಗುವ ತಂತ್ರಜ್ಞಾನವು
ಈ ಉದ್ದೇಶದೊಂದಿಗೆ ಸಿಂಕ್ ಆಗಿದೆ. ಅಮೃತ್ ಕಾಲ್
ಸಮಯದಲ್ಲಿ, ಭಾರತವು ಹಸಿರು ಬೆಳವಣಿಗೆ ಮತ್ತು
ಹಸಿರು ಉದ್ಯೋಗಗಳ ಮನಸ್ಥಿತಿಯೊಂದಿಗೆ
ಮುಂದುವರಿಯುತ್ತಿದೆ ಅಂದ್ರು. ಕಾರ್ಯಕ್ರಮದಲ್ಲಿಘನತೆವೆತ್ತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ರವರು ಹಾಗೂ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ  ಬಿ ಎಸ್ ಯಡಿಯೂರಪ್ಪನವರು, ಬಿಜೆಪಿ ರಾಜ್ಯಾಧ್ಯಕ್ಷರು ಕ್ಷೀಣ ಕನ್ನಡ ಜಿಲ್ಲೆಯ ಸಂಸದರಾದ  ನಳಿನ್ ಕುಮಾರ್

ಕಟೀಲ್ ಅವರು,ಕೇಂದ್ರ ಸಚಿವರುಗಳಾದ  ಪ್ರಹ್ಲಾದ್ ಜೋಷಿ ಯವರು, ಕುಮಾರಿ ಶೋಭಾ ಕರಂದ್ಲಾಜೆ, ಸರ್ಬಾನಂದ ಸೋನಾವಲ, ಶ್ರೀಪಾದ್ ನಾಯಕ್,ರಾಜ್ಯ ಸಚಿವರಾದ ವಿ ಸುನಿಲ್ ಕುಮಾರ್,ಎಸ್ ಅಂಗಾರ, ಶಾಸಕರಾದ ಹರೀಶ್ ಪೂಂಜ, ಸಂಜೀವ ಮಂಜೂರು, ರಾಜೇಶ್ ನಾಯ್ಕ‌ಸೇರಿದಂತೆ ಶಾಸಕಗಳು  ಮತ್ತು ಪಕ್ಷದ ಹಿರಿಯರು, ಅಪಾರ ಕಾರ್ಯಕರ್ತರು ಉಪಸ್ಥತರಿದ್ದು ಕಾರ್ಯಕ್ರಮವನ್ನು ಯಶಸ್ವಗೊಳಿಸಿದರು.

3,800 ಕೋಟಿ ರೂಪಾಯಿಗಳಿಗೂ ಅಧಿಕ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದ

ಕಾರ್ಯಕ್ರಮದಲ್ಲಿಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು, ಬಿಜೆಪಿ ರಾಜ್ಯಾಧ್ಯಕ್ಷರು ಕ್ಷೀಣ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು,ಕೇಂದ್ರ ಸಚಿವರುಗಳಾದ ಶ್ರೀ ಪ್ರಹ್ಲಾದ್ ಜೋಷಿ ಯವರು, ಕುಮಾರಿ ಶೋಭಾ ಕರಂದ್ಲಾಜೆ, ಸರ್ಬಾನಂದ ಸೋನಾವಲ, ಶ್ರೀಪಾದ್ ನಾಯಕ್,ರಾಜ್ಯ ಸಚಿವರಾದ ವಿ ಸುನಿಲ್ ಕುಮಾರ್,ಎಸ್ ಅಂಗಾರ ಸೇರಿದಂತೆ ಶಾಸಕ ಮಿತ್ರರು ಮತ್ತು ಪಕ್ಷದ ಹಿರಿಯರು, ಅಪಾರ ಕಾರ್ಯಕರ್ತರು ಉಪಸ್ಥತರಿದ್ದು ಕಾರ್ಯಕ್ರಮವನ್ನು ಯಶಸ್ವಗೊಳಿಸಿದರು.

ನಿಮ್ಮದೊಂದು ಉತ್ತರ