ಗ್ರಾಮಾಂತರ ಸುದ್ದಿ

ನೆರಿಯ ಗ್ರಾಮ ದಲ್ಲೊಬ್ಬರು ಕೊರೊನಾ ಸೈನಿಕ……..*

ಅಣ್ಣಾ ಮಾಸ್ಕ್ ಪಾಡೋನ್ಲೇ…….ದೂರ ದೂರ ಉಂತುದು ಸಾಮಾನ್ ದೆತೋoದು ಪೋಲೇ…..ಪೊಕ್ಕಡೇ ಪಾತೆರೊಂದು ಉಂತೊಡುಚಿ…….ಇದು ನೆರಿಯ ಗ್ರಾಮದ ಅಣಿಯೂರ್ ಪೇಟೆಯಲ್ಲಿ ದಿನ ನಿತ್ಯ ನಮ್ಮ ಹರೀಶ್ ರವರ ಬಾಯಿಯಲ್ಲಿ ಬರುವ ಮಾತುಗಳು….ಕಂದಾಯ ಇಲಾಖೆಯಲ್ಲಿ ಗ್ರಾಮಸಹಾಯಕನಾಗಿರುವ ನೆರಿಯ ಗ್ರಾಮದ *ವಿ .ಹರೀಶ್* ಕೋರೋನ ವಿರುದ್ದದ ಹೋರಾಟದಲ್ಲಿ ತನ್ನನ್ನು ತಾನು

ತೊಡಗಿಸಿಕೊಂಡು ನೆರಿಯ ಗ್ರಾಮದಲ್ಲಿ ಕೋರೋನ ಬಗ್ಗೆ ಜಾಗ್ರತಿ ಮೂಡಿಸುತ್ತಾ ಮಾಡಿತ್ತಿರುವ ಕಾರ್ಯ ಶ್ಲಾಘನೀಯ. ನೆರಿಯ ಗ್ರಾಮದಲ್ಲಿ ಆರೋಗ್ಯ ಕಾರ್ಯಕರ್ತರ ಜೊತೆ ಗ್ರಾಮದ ಮನೆ ಮನೆಗೆ ತೆರಳಿ ಸ್ವಾಬ್ ಸಂಗ್ರಹ, ನೆರಿಯ ಗ್ರಾಮವು ಸ್ವಯಂ ಪ್ರೇರಿತ ವಾಗಿ ಒಂದುವಾರಗಳ ವರೆಗೆ ಲೋಕ್ ಡೌನ್ ಘೋಷಿಸಿ ಕೊಂಡಾಗ ಗ್ರಾಮದ ಸರಹದ್ದಿನಲ್ಲಿ ಚೆಕ್ ಪೋಸ್ಟಿನಲ್ಲಿ ಕರ್ತವ್ಯ ನಿರ್ವಹಣೆಯ

ಜೊತೆಗೆ ಗ್ರಾಮಸ್ಥರ ಕೋರಿಕೆಯಂತೆ ಮೆಡಿಕಲ್ ನಿಂದ ಔಷದಿಯನ್ನು ಮನೆ ಬಾಗಿಲಿಗೆ ತಲುಪಿಸಿ
ದವರು, ಸಿಯೋನ್ ಆಶ್ರಮದಗೋಶಾಲೆಯ ಗೋವುಗಳ ಸ್ವಚ್ಛತೆ ಯಲ್ಲಿಭಾಗಿಯಾದವರು. ನೆರಿಯ ಗ್ರಾಮದಲ್ಲಿ ಕೋವಿಡ್ನಿಂದ ಮೃತ ರಾದ 2 ವ್ಯಕ್ತಿಗಳ ಅಂತ್ಯ ಸಂಸ್ಕಾರ ವನ್ನು ಸ್ಥಳೀ
ಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರೊಂದಿಗೆ ಸೇರಿಕೊಂಡು ನಿರ್ವಹಿ
ಸಿದವರು.ಲೋಕ್ಡೌನ್ ಪ್ರಾರಂಭವಾದ ದಿನ
ದಿಂದ ಸ್ಥಳೀಯ ಜಯಕೇಸರಿ ಯುವಜನ ಸಂಘದ ಸಹಕಾರದಲ್ಲಿ ನೆರಿಯ ಗ್ರಾಮದಿಂದ ಮುಂಡಾಜೆ ವರೆಗಿನ ಬೀದಿ ಶ್ವಾನಗಳಿಗೆ ಸಂಜೆ ಒಂದು ಹೊತ್ತಿನ ಆಹಾರ


ವನ್ನು ನೀಡುತ್ತಾ ಬಂದಿರು ತ್ತಾರೆ. ಹೀಗೆ ಹಲವು ವಿಧಗಳಲ್ಲಿ ಕೋವಿಡ್ ಕರ್ತವ್ಯ ದಲ್ಲಿ ಬೆಳಿಗ್ಗೆ 6.ರಿಂದ ರಾತ್ರಿ 10. ಗಂಟೆಯವರೆಗೆ ಶ್ರಮ ವಹಿಸುತ್ತಾ.. ತನ್ನ ಗ್ರಾಮ ಸಹಾಯಕ ವೃತ್ತಿಗೆ ನಿಜಅರ್ಥದಲ್ಲೂ ಗ್ರಾಮದಸಹಾಯಕನಾಗಿರುವ ತಾವುಇತರರಿಗೂ ಮಾದರಿ ಯಾಗಿರಿ.. ಗ್ರಾಮಸ್ಥರ ಆರೋಗ್ಯದ ಜೊತೆ ನಿಮ್ಮ ಆರೋಗ್ಯವೂ ಸುರಕ್ಷಿತವಾಗಿ ಇನ್ನಷ್ಟು ಉತ್ತಮ ಸೇವೆ ಮಾಡು
ವ ಅವಕಾಶ ದೊರಯ
ಲಿ ಎಂಬುದೇ ಜನಧ್ವನಿ ಬಳಗದ ಆಶಯ ..

ನಿಮ್ಮದೊಂದು ಉತ್ತರ