ನಿಧನ ಸುದ್ದಿ

ಎಡೂ೯ರು: ಎಂಡೋ ಪೀಡಿತ ಯುವತಿ ರೇಷ್ಮಾ ಮೃತ್ಯು

ಗುರುವಾಯನಕೆರೆ:ಇಲ್ಲಿಯ ಯರ್ಡೂರು ನಿವಾಸಿ ಎಂಡೋ ಪೀಡಿತ ಯುವತಿ ರೇಷ್ಮಾ (27ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.21 ರಂದು ಕೊನೆಯುಸಿರೆಳೆದಿದ್ದಾರೆ.

ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಹಣ್ಣು-ಹಂಪಲು ವ್ಯಾಪಾರಸ್ಥರಾದ ವಿಜಯ ಕುಮಾರ್ ನಾಯರ್ ಮತ್ತು ಸುಜಾತಾ ದಂಪತಿ ಪುತ್ರಿಯಾಗಿರುವ ರೇಷ್ಮಾ ಅವರು ಎಂಡೋ ಪೀಡಿತೆಯಾಗಿ ದೀರ್ಘ ವರ್ಷಗಳಿಂದ ಚಾಪೆಹಿಡಿದು ಮಲಗಿದ್ದಲ್ಲೇ ಇದ್ದರು.


ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಲಾಯಿಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಆ.24ರಂದು ಕೊನೆಯುಸಿರೆಳೆದಿದ್ದಾರೆ.ಮೃತರು ತಂದೆ, ತಾಯಿ,
ಸಹೋದರಿಯರಾದ ರಮ್ಯಾ ಮತ್ತು ರಶ್ಮಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ