ಬಂಟ್ವಾಳ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ವಿಭಾಗದಲ್ಲಿ ಸುದೀರ್ಘ ೨೦ ವರ್ಷಗಳ ಸೇವೆ ಸಲ್ಲಿಸಿದ ಕೃಷ್ಣಪ್ಪ ಸಿಂಗಾರಕೋಡಿ ಅವರು ಸಲ್ಲಿಸಿದ ಅತ್ಯುತ್ತಮ ಸೇವೆಗಳನ್ನು ಪರಿಗಣಿಸಿ, ೨೦೨೦ ನೇ ಸಾಲಿನ ಘನವೆತ್ತ ರಾಷ್ಟಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಬೆಂಗಳೂರಿನ ಗಾಜಿನ ಮನೆ ರಾಜಭವನ ದಲ್ಲಿ ನ.೭ರಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಅವರು ಎಸ್. ಕೃಷ್ಣಪ್ಪ ಸಿಂಗಾರಕೋಡಿ ಅವರಿಗೆ ಚಿನ್ನದ ಪದಕ ಸಹಿತ ಪುರಸ್ಕಾರವನ್ನು ಪ್ರಧಾನಿಸಿ ಅತ್ಯುತ್ತಮ ಸೇವೆಯನ್ನು ಅಭಿನಂದಿಸಿದ್ದಾರೆ.
ಈ ವೇಳೆ ರಾಜ್ಯ ಗೃಹ ಸಚಿವರಾದ ಅರಗಜ್ಞಾನೇಂದ್ರ ಹಾಗೂ ಹಿರಿಯ ಅಧಿಕಾರಿಗಳು ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು. ಪ್ರಸ್ತುತ ಇವರು ಅಗ್ನಿಶಾಮಕ ಠಾಣೆ ಬಂಟ್ವಾಳ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.