ಬಂಟ್ವಾಳ: ನ.3 ರಂದು ಬಂಟ್ವಾಳ ತಾಲ್ಲೂಕು ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿ ರಾಘವ ನಾಯಕ್ ಎಂಬವರ ಮನೆಯ ಮಹಡಿಯ ಮಲಗುವ ಕೋಣೆಯಲ್ಲಿರುವ ಹಾಸಿಗೆ ಮತ್ತು ಮರದ ಮಂಚಕ್ಕೆ ಆಕಸ್ಮಾತ್ತಾಗಿ ಬೆಂಕಿ ತಗಲಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣ ತೆರಳಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿರುತ್ತಾರೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಅಧಿಕಾರಿ ರವೀಂದ್ರ .ಯು.ಪ್ರಮುಖ ಅಗ್ನಿ ಶಾಮಕರಾದ ಪುರುಷೋತ್ತಮ ,ಹಾಗೂ ರೋಹಿತ್ ಮತ್ತು ಚಾಲಕ ನಂದಪ್ಪ ನಾಯ್ಕೂಡಿ ,ಅಗ್ನಿ ಶಾಮಕ ರುಕ್ಕಯ್ಯ ಅಮೀನ್ ಮತ್ತು ಗ್ರಹರಕ್ಷಕ ದಳ ಸಿಬ್ಬಂದಿ ಜಯಗಣೇಶ್ ಭಾಗವಹಿಸಿದರು.