ಕ್ರೈಂ ವಾರ್ತೆ

ಕಡತ ದುರುಪಯೋಗ ಪ್ರಕರಣ ಗ್ರಾಮಕರಣಿಕ ಜಯಚಂದ್ರ ಬಂಧನ

ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆ ದುರುಪಯೋಗ ಪ್ರಕರಣದ ಆರೋಪದಲ್ಲಿ ಗ್ರಾಮ ಕರಣಿಕರೋರ್ವರನ್ನು ಬಂಧಿಸಿದ ಘಟನೆ ಸೆ.7ರಂದು ವರದಿಯಾಗಿದೆ.

ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕರಾದ ಜಯಚಂದ್ರ ಅವರು ಬಂಧನಕೊಳಗಾಗಿದ್ದು, ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ 2008ರಲ್ಲಿ ಕೊಕ್ಕಡ ಹೋಬಳಿಯ ಎನ್‌ಸಿಆರ್ ಪೈಲ್‌ಗಳ ಕೇಸ್ ವರ್ಕರ್ ಆಗಿದ್ದ ಜಯಚಂದ್ರ ಪಿ.ಎನ್, ಇನ್ನೋರ್ವ ಆರೋಪಿ ರಾಜು ಎಂಬಾತನೊಂದಿಗೆ ಸೇರಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ
ಸರಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ತಾಲೂಕು ಕಚೇರಿಗೆ ಸಾರ್ವಜನಿಕರಿಂದ ಬಂದ ಎನ್‌ಸಿಆರ್ ಪೈಲ್‌ಗನ್ನು ರಾಜು ವಶಕ್ಕೆ ನೀಡಿ, ಆ ಪೈಲ್‌ಗಳನ್ನು ಅಪ್ರಮಾಣಿಕವಾಗಿ ತನ್ನ ವಶದಲ್ಲಿ ಬಚ್ಚಿಟ್ಟದನ್ನು ರಾಜು ತಾಲೂಕು ಕಚೇರಿಗೆ ನೀಡಿ ಆರೋಪಿಗಳು ವಂಚನೆ ಹಾಗೂ ನಂಬಿಕೆಗೆ ದ್ರೋಹ ಎಸಗಿರುವ ಬಗ್ಗೆ ಆ.16ರಂದು ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು.
ಸೆ.7ರಂದು ಜಯಚಂದ್ರ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ