ಲಾಯಿಲ:ತನ್ನಮನೆಯ
ಅಂಗಳದಲ್ಲಿರುವ ತೆಂಗಿನ ಮರದ ಗರಿಯನ್ನು ಕೀಳುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸುಟ್ಟಗಾಯವಾ
ಗಿದ್ದು ನೆರೆಮನೆಯಲ್ಲಿದ್ದ ಯುವಕನು ನೀಡಿದ ಪ್ರಥಮಚಿಕಿತ್ಸೆಯಿಂದಾಗಿಪ್ರಾಣಾಣಾಪಾಯದಿಂದ ಪಾರಾದ ಘಟನೆ ಅ.2 ರಂದು ಲಾಯಿಲದಲ್ಲಿ
ನಡೆದಿದೆ.
ಘಟನೆಯ ವಿವರ: ಲಾಯಿಲ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿರಿಜ್ವಾನ್ (28.ವ) ಎಂಬವರು ತನ್ನ ಮನೆಯ ಅಂಗಳದಲ್ಲಿರುವತೆಂಗಿನಮರದ ಗರಿಯು ವಿದ್ಯುತ್ ತಂತಿಗೆ ತಾಗಿಕೊಂಡತ್ತಿದ್ದುದನ್ನು ಗಮನಿಸಿ, ಬಿದಿರಿನ ಕೊಕ್ಕೆಯಿಂದ ಅದನ್ನು ತೆಗೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಅಂಗಳಕ್ಕೆ ಎಸೆಯಲ್ಪಟ್ಟಿದ್ದರು. ಇದನ್ನು ಕಂಡು ಆತನ ತಾಯಿ ಬೊಬ್ಬೆ ಹೊಡೆದಿದ್ದು, ಪಕ್ಕದ ಮನೆಯಲ್ಲಿ ಫ್ರೆಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಉಜಿರೆ ಕುಂಟಿನಿ ನಿವಾಸಿ ಆಸೀಫ್ ಎಂಬವರು ಕೂಡಲೇ ಸ್ಥಳಕ್ಕೆ ಧಾವಿಸಿ, ಗಂಭೀರ ಸ್ಥಿತಿಯಲ್ಲಿದ್ದ ರಿಝಾನ್ ರವರಿಗೆ ಸುಮಾರು 20 ನಿಮಿಷಗಳ ಕಾಲ ನಿರಂತರವಾಗಿ ತಮ್ಮ ಬಾಯಿಯಿಂದ ಕೃತಕ ಉಸಿರಾಟವನ್ನು ನೀಡುವ ಮುಖಾಂತರ ಸಾವಿನಂಚಿನಲ್ಲಿದ್ದ ಯುವಕನ್ನು ಬದುಕಿಸಿ ಜೀವದಾನ ನೀಡಿದ್ದಾರೆ.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಿಝಾನ್ ರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸೀಫ್ ರವರ ಸೂಕ್ತ ಸಮಯ ಪ್ರಜ್ಞೆಯಿಂ
ದಾಗಿ ಓರ್ವ ಯುವಕ ಪ್ರಾಣಾಪಾಯದಿಂದ
ಪಾರಾದಂತಾಗಿದೆ. ಈ ಸತ್ಕಾರ್ಯದಿಂದಾಗಿ ಆಸೀಫ್ ರವರು ಸ್ಥಳೀಯರ ಶ್ಲಾಘನೆಗೆ ಪಾತ್ರರಾಗಿದ್ದಾರೆ