ಬೆಳ್ತಂಗಡಿ: ಒಂಬತ್ತು ತಿಂಗಳ ಹಿಂದೆ ವಿವಾಹವಾಗಿದ್ದ ವ್ಯಕ್ತಿಯೋವ೯ ಹೆಂಡತಿಯಲ್ಲಿ ಮನಸ್ತಾಪ ದಿಂದ ಕಾರಿನಲ್ಲಿ ನಾದಿನಿಯನ್ನು ಕರೆದೊಯ್ದ ಘಟನೆ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ.
9 ತಿಂಗಳ ಹಿಂದೆ ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು ಮುಸ್ತಫಾ ಎಂಬಾತನಿಗೆ ಮದುವೆ ಮಾಡಿಕೊಡಲಾಗಿದ್ದು, ಆಗಾಗ ಮಗಳು ಹಾಗೂ ಅಳಿಯ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ (ಪತ್ನಿಯ ತಂಗಿ)ಜೊತೆಗೆ ಅಳಿಯ ಮುಸ್ತಫಾ ಸಲುಗೆ
ಯಿಂದ ಇದ್ದುದ್ದಲ್ಲದೇ ಪೋನ್ ಮುಖಾಂತರ ಕೂಡ ಮಾತನಾಡುತ್ತಿದ್ದರು ಎನ್ನಲಾಗಿದೆ.
ಇತ್ತೀಚಿಗೆ ಸೌಧಾ ಹಾಗೂ ಮುಸ್ತಫಾ ನಡುವೆ ಮನಸ್ತಾಪವಾಗಿದ್ದರಿಂದ, ಸೌಧಾ ತನ್ನ ತವರು ಮನೆಯಲ್ಲಿಯೇ ಇದ್ದಳು. ಜು.8 ರಂದು ಬೆಳಿಗ್ಗೆ ಸುಮಾರು 6.45 ಗಂಟೆಗೆ ಮುಸ್ತಫಾ ಹಾಗೂ ಅವನ ತಾಯಿ ಕಾರಿನಲ್ಲಿ ಕನ್ಯಾಡಿಯ ಕೈಕಂಬದಲ್ಲಿರುವ ಮಾವನ ಮನೆಗೆ ಬಂದಿದ್ದು, ಆ ಸಮಯ ನಾದಿನಿ ಮನೆಯಲ್ಲಿ ಯಾರಿಗೂ ಹೇಳದೇ ಬ್ಯಾಗೊಂದನ್ನು ಹಿಡಿದುಕೊಂಡು ಕಾರುಹತ್ತಿ ಹೋಗಿದ್ದಾಳೆ ಎಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.ಬೆಳ್ತಂಗಡಿ ಠಾಣೆಯಲ್ಲಿಪ್ರಕರಣದಾಖಲಾಗಿದ್ದು ತನಿಖೆ ನಡೆಯುತ್ತಿದೆ.