ಮೊಗ್ರು ಗ್ರಾಮದ ಮುಗೇರಡ್ಕ ಹತ್ತಿರದ ಬನತ್ತಕೋಡಿ ಲೀಲಾವತಿ ಯವರ ಮನೆಯ ಬಚ್ಚಲು ಕೋಣೆಗೆ ನುಗ್ಗಿದ ಸುಮಾರು 8ಅಡಿ ಉದ್ದದ ಕಾಳಿಂಗ ಸರ್ಪ
ಮೊಗ್ಗು: ಬೆಳ್ತಂಗಡಿ ತಾಲ್ಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಹತ್ತಿರದ ಬನತ್ತಕೋಡಿ ಲೀಲಾವತಿ ಯವರ ಮನೆಯ ಬಚ್ಚಲು ಕೋಣೆಗೆ ನುಗ್ಗಿದ ಸುಮಾರು 8ಅಡಿ
ಉದ್ದದ ಕಾಳಿಂಗ ಸರ್ಪ ವನ್ನು ಸ್ಥಳೀಯ ಕೇಶವ ರವರ ಸಮಯ ಪ್ರಜ್ಞೆಯಿಂದ ಉರಗ ತಜ್ಞರಾದ ಪುತ್ತೂರಿನ ತೇಜಸ್ ಮತ್ತು ಪುನೀತ್ ರವರು ತಕ್ಷಣ ಸ್ಪಂದಿಸಿ ಹಾವನ್ನು ರಕ್ಷಣೆ ಮಾಡಿದ್ದಾರೆ.
ಸ್ಥಳೀಯರಿಗೆ ಮೊದಲ ಬಾರಿ ಕಾಳಿಂಗ ಸರ್ಪವನ್ನು ನೋಡಿದ ಅನುಭವವು ಆಯಿತು. ನಂತರ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಯಿತು.